ಬೇರುಗಳು

ಈಗಷ್ಟೆ ಪತ್ರ ಬಂತು
ಮಿ. ಪ್ಯಾಟ್ರಿಕ್‌ನ ಬರವಣಿಗೆ
ಕತ್ತೆ ಕಾಲು ನಾಯಿಕಾಲು ಆನೆಕಾಲು
ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ-
ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ
ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು
ಜೋಕ್ಸು ಮಾತುಕತೆಗಳೇನೇ ಇರಲಿ ದೊಡ್ಡ ಬಾಯಿಯವ

ಬರೆದಿದ್ದಾನೆ
೫೦ ಡಿಗ್ರಿ ಬಿಸಿಲಿನ ಹೊಡೆತಕ್ಕೂ
ತೆಂಗಿನ ಮರ ಬೆಳೆದುನಿಂತಿದೆ ಆಕಾಶದೆತ್ತರ
ಹಣ್ಣುಗಳು ಬಿಡುತಿವೆ ಪಪಾಯಿ ಗಿಡದಲಿ
ಸೊಂಪಾಗಿ ಹಬ್ಬಿದೆ ಮಲ್ಲಿಗೆ ಬಳ್ಳಿ
ಅದೇಕೋ ಮುನಿಸಿಕೊಂಡಿದೆ ಮಾವಿನಗಿಡ
ಮೇಲೆಳುತ್ತಲೇ ಇಲ್ಲ ಸಲಹೆ ಏನಾದರೂ….
ಸ್ಯಾಂಡಲ್‌ವುಡ್ ಆನೆಗಳ ಹಿಂಡು
ಹೆಂಡತಿಗೆ ಕೊಟ್ಟ ಬಿಂದಿ ಪೊಟ್ಟಣ
ರೇಶ್ಮೆ ಸೀರೆ ನಿಮ್ಮೂರಿಗೆ ಏಳೆಯುತ್ತವೆ.
ಜೊತೆಗೆ ಕಳಿಸಿದ್ದಾನೆ ಇವುಗಳೆಲ್ಲದರ ಫೋಟೋ.

ಭಾವಪರವಶಳಾಗಿ ಹೃದಯ ತುಂಬಿತು
ವಿದೇಶಕ್ಕೆ ಹೊರಟ ಅಂದು
ನೆಲದಿಂದ ಹೆಜ್ಜೆ ಕೀಳುವಾಗ
ನೆಲ-ಜಲದ ಋಣ ನೆನಪಿಗಿರಲೆಂದು
ಬೊಗಸೆ ಮಣ್ಣು ನಾಲ್ಕಾರು ಬೇರುಗಳು
ನನ್ನೊಂದಿಗಿರಲೆಂದು ನೀರಿನಲ್ಲೆದ್ದೆದ್ದಿ ಒಯ್ದಿದ್ದೆ

ಕಿಡಕಿಯಾಚೆ ಸೊಂಪಾದ ಗಿಡಬಳ್ಳಿಗಳು
ಕೈತೋಟದ ತುಂಬ ಹೂವುಗಳು
ವರ್ಷಗಳುರುಳುರುಳಿ ಬೆಳೆಯತೊಡಗಿದವು
ಮನೆಗೆ ಹೊಸದಾಗಿ ಬರುತ್ತಿರುವ
ಮಿ. ಪ್ಯಾಟ್ರಿಕ್‌ನಿಗೆ ಹಸಿರು ಹಸ್ತಾಂತರಿಸಿ
ಇವು ನಮ್ಮ ಮಕ್ಕಳೆಂದು ಹೇಳಿ ಬಂದಾಗಿತ್ತು.

ಮತ್ತೆ ಮುಂದುವರೆಸಿದ್ದಾನೆ-
ಹಾಲೆಂಡಿನ ಫರ್ಟಿಲೈಸರ್
ಅಮೆರಿಕದ ಇನ್‌ಸೆಕ್ಟಿಸೈಡ್
ಫಿಲಿಪೈನಿನ ಗಾರ್ಡನರ್
ಇಲ್ಲಿಯ ಡಿಸ್ಟಿಲ್ಡ್ ವಾಟರ್
ನಿಮ್ಮ ಬೇರುಗಳು ಇನ್ನೂ ಇನ್ನೂ ನೆಲದಾಳಕ್ಕಿಳಿಯುತ್ತಿವೆ
ಟೊಂಗೆಗಳೆಲ್ಲ ದಿಕ್ಕು ದಿಕ್ಕಿಗೂ ಚಾಚಿ
ಕೊಡುತಿವೆ ಚಿಗುರು ಹೂವು ಕಾಯಿ ಹಣ್ಣು
ಸುಂದರ ಅತೀ ಸುಂದರ

ಈ ನೆಲದ ಮಣ್ಣು ಬೇರು ಆ ನೆಲದ ನೀರು ಗಾಳಿ
ಬಾಯಿಪಾಠವಾಗಿ ಹೋಗಿದೆ ಪತ್ರ
ದೂರದೇಶಕೆ ಹೊರಡುವ ಮಕ್ಕಳಿಗೂ
ಭಾರವಾದರೂ ಇರಲೆಂದು
ಬೊಗಸೆಮಣ್ಣು ನಾಲ್ಕಾರು ಬೇರು ಕಳಿಸಿಬಿಡುತ್ತೇನೆ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಳ್ಳಾರಿ ರೆಡ್ಡಿ ಹೊಡೆತ ಕೋಲ್ಟು ಉಗಿತ ಕೆರಳಿದ ಗೋಡ್ರ ಕುಣಿತ
Next post ದಣಿದ ಜೀವಕೆ ಮತ್ತೆ ಕನಸುನುಣಿಸಿ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys